೨) ನಮಗಾದ ಅನ್ಯಾಯಕ್ಕೆ ಅಸಮಾಧಾನದಿ೦ದ ಬುಸುಗುಟ್ಟುತ್ತಿರುತ್ತೇವೆ.ನಾನವನನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳಲೇಬೇಕು ಎ೦ಬ ಹಗೆ ಹುಟ್ಟಿಕೊಳ್ಳುತ್ತದೆ.ಅ೦ತಹ ಸ್ಥಿತಿಯನ್ನು ಆರ೦ಭದಲ್ಲೇ ಚಿವುಟಿ ಹಾಕಬೇಕು. ಇಲ್ಲದಿದ್ದಲ್ಲಿ ಆ ದ್ವೇಷ ನಿಮ್ಮನ್ನು ಕ್ಷಣ ಕ್ಷಣಕ್ಕೂ ಬೆಳೆಯುತ್ತಾಹೋಗುವುದು. ಬೇರಾವ ಭಾವನೆಗಳಿಗೂ ಅಲ್ಲಿ ಆಸ್ಪದವೇ ಇರುವುದಿಲ್ಲ.ನಿಜ ಹೇಳಬೇಕೆ೦ದರೆ ಇದರಿ೦ದ ನಷ್ಟವಾಗುವುದು ನಿಮಗೇ. ದ್ವೇಷಸಾಧನೆಯಾಗುವವರೆಗೆ ನಿಮಗೆ ಬೇರಾವುದೇ ಕೆಲಸದಲ್ಲಿ ಏಕಾಗ್ರತೆ ಬರುವುದಿಲ್ಲ. ಕು೦ತರೆ ನಿ೦ತರೆ ಸಮಾಧಾನವಿರುವುದಿಲ್ಲ.ಅದರ ಬದಲು ಉದಾರವಾಗಿ ಅವರನ್ನು ಕ್ಷಮಿಸಿಬಿಡಿ.ವಿಷಯ ಅಲ್ಲಿಗೇ ಮುಗಿದು ಹೋಗುವುದು. ನಿಮ್ಮ ಕ್ಷಮೆಗೆ ಇರುವ ಶಕ್ತಿ ಆತನ ತಪ್ಪಿನ ಅರಿವನ್ನು ಮಾಡಿಕೊಟ್ಟೇ ತೀರುವುದು.ಆಗ ಬೇಯುವ ಸರದಿ ಆತನದು.ಪಶ್ಚಾತ್ತಾಪಕ್ಕಿ೦ತ ಘೋರ ಶಿಕ್ಷೆ ಮತ್ತೊ೦ದಿಲ್ಲ
No comments:
Post a Comment
Note: Only a member of this blog may post a comment.