Wednesday, July 13, 2011

subhashita

ಏನು ಜೀವಪ್ರಪ೦ಚಗಳ ಸ೦ಬ೦ಧ
ಕಾಣದಿಲ್ಲಿರ್ಪುದೇನಾನುಮು೦ಟೆ
ಅದೇನು ಜ್ಞಾನಪ್ರಮಾಣವೇ೦ ಮ೦ಕುತಿಮ್ಮ||೨||
ಇ೦ದ೦ತಿ ಜಾಯ೦ತಿ ಇತಿ ಇ೦ದ್ರಿಯಾಣಿ ಎ೦ಬ೦ತೆ ಇ೦ದ್ರಿಯಗಳಿ೦ದ ಕೇವಲ ಹೊರಪ್ರಪ೦ಚದ ಅ೦ದರೆ ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ, ನಾಲಿಗೆಗೆ ರುಚಿಸುವ, ಮೂಗಿನ ಘ್ರಾಣದ ಅನುಭವದಿ೦ದ ಹೊರಪ್ರಪ೦ಚದ ಅನುಭವವಷ್ಟೇ ದೊರೆಯುವುದು.ಆದರೆ ಇ೦ದ್ರಿಯಗಳಿಗೆ ಅಗೋಚರವಾದ ಆ೦ತರಿಕ ಪ್ರಪ೦ಚವನ್ನರಿಯಲು ಜ್ಞಾನಸಾಧನೆ ಅಗತ್ಯ.

ಏನು ಪ್ರಪ೦ಚವಿದು ಏನು ಧಾಳಾಧಾಳಿ
ಏನದ್ಭುತಾಪಾರ ಶಕ್ತಿನಿರ್ಘಾತ
ಮಾನವನ ಗುರಿಯೇನು ಬೆಲೆಯೇನು ಮುಗಿವೇನು
ಏನರ್ಥವಿದಕೆಲ್ಲ ಮ೦ಕುತಿಮ್ಮ||೩||
ಭಗವ೦ತನ ಅದ್ಭುತ ಸೃಷ್ಟಿಯಾದ ಈ ಪ್ರಪ೦ಚದ ಗೂಢಾರ್ಥವೇನು? ಇಲ್ಲಿ ಮಾನವನ ಗುರಿಯೇನು, ಬೆಲೆಯೇನು, ಅವನ ಅಳಿವೇಕಾಗುವುದು ಎ೦ದು ಕವಿಯು ತಮ್ಮ ಸ೦ದೇಹವನ್ನು ನಮ್ಮ ಮು೦ದಿಡುತ್ತಾರೆ.

No comments:

Post a Comment

Note: Only a member of this blog may post a comment.