Thursday, February 10, 2011

vAave mattu gaTTipada


aaರಡಿಯ ವಾಹನನ ವಾಹನನ
ದಾರಿಯೊಳು ತರುತಿರ್ದ ಪ್ರೇಮದಿ
ಮಾರಸತಿಸುತ ಪ್ರೇಮಿಯನ ಹೊರುವವ ನೂ೦ಕಿದನು ತಾಯೆ
ಸೂರಿಯನ ಸುತ ಭೂಮಿಗೊ೦ದಲು
ಭೂರಿಕ್ಲೇಶಮದಾಯ್ತು ನದಿರಮ
ಣಾರಿಪಿತ ತಾ೦ ಭ೦ಗವಾದುದೆನುತ್ತೆ ಪೇಳಿದಳು

ತು೦ಬಿಯನ್ನು ವಾಹನವಾಗಿ ಉಳ್ಳ ಕಮಲಕ್ಕೆ ವಾಹನವಾದ ಉದಕವನ್ನು ದಾರಿಯಲ್ಲಿ ಪ್ರೀತಿಯಿ೦ದ ತರುತ್ತಿದ್ದೆ.ಮನ್ಮಥನ ಸತಿ ರತಿಯ ಸುತ ಚ೦ದ್ರನಲ್ಲಿ ಮಮತೆಯನ್ನುಳ್ಳ ಪರಮೇಶ್ವರನನ್ನು ಹೊತ್ತುಕೊ೦ಡು ಹೋಗುತ್ತಿದ್ದ ಅನಡ್ವನು ನೂಕಿದನು ತಾಯೆ. ಆದಿತ್ಯನ ಮಗನ ಹೆಸರುಳ್ಳ ಕರ್ಣಲು ಭೂಮಿಗೆ ಬೀಳಲು ಬಹಳ ದುಃಖವಾಯಿತು. ನದಿಗಳಿಗೆ ಒಡೆಯನಾದ ಸಮುದ್ರರಾಜನ ಶತ್ರುವಾದ ಅಗಸ್ತ್ಯನ ತ೦ದೆಯಾದ ಕೊಡನು ಒಡೆದುಹೋಯಿತೆ೦ದು ಹೇಳಿದಳು.

No comments:

Post a Comment

Note: Only a member of this blog may post a comment.