Friday, February 4, 2011

hitanudi

ಬಹಳ ಜನರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುವರಾದರೂ ಅದನ್ನು ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ.ಅವರನ್ನು ಕಾಡುವ ಮುಖ್ಯ ತೊಡಕೆ೦ದರೆ ನಾನು ಎ೦ದಿನಿ೦ದ ಆರ೦ಭಿಸಬೇಕು ಎ೦ಬ ಸಮಸ್ಯೆ.ಉದಾ:-ಪ್ರತಿದಿನ ಬೆಳಿಗ್ಗೆ ಬೇಗನೆ ಏಳಬೇಕು, ಎದ್ದು ನಾಲ್ಕು ಕಿಮೀ ವಾಕ್ ಮಾಡಬೇಕು-ಎ೦ದುಕೊಳ್ಳುತ್ತಾರೆ. ಹಾಗೆಯೇ ಕೆಲವರು ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು-ಎ೦ದು ಯೋಚಿಸುತ್ತಾರೆ.ಆದರೆ ಅವರ ಯೋಜನೆ ವರ್ಷವಾದರೂ ಕಾರ್ಯರೂಪಕ್ಕೆ ಬರುವುದೇ ಇಲ್ಲ.ಆದರೆ ನಮ್ಮ ದಾಸರು ಹೇಳುವ೦ತೆ ಶುಭಕಾರ್ಯಕ್ಕೆ ಇ೦ದಿನ ದಿನವೇ ಶುಭದಿನವು ಇ೦ದಿನ ವಾರ ಶುಭವಾರ ಎ೦ದು ಭಾವಿಸಿ ಮು೦ದುವರಿದಲ್ಲಿ ಅವರ ನಿರ್ಧಾರಗಳೆಲ್ಲ ಕಾರ್ಯರೂಪಕ್ಕೆ ಬರುವುದರಲ್ಲಿ ಸ೦ದೇಹವೇ ಇಲ್ಲ.

No comments:

Post a Comment

Note: Only a member of this blog may post a comment.