ಮನಸ್ಯೇಕ೦ ವಚಸ್ಯೇಕ೦ ಕರ್ಮಣ್ಯೇಕ೦ ಮಹಾತ್ಮಾನಾಮ್|
ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್||೮೭||
ಮಹಾತ್ಮರಿಗೆ ಮನಸ್ಸು, ವಚನ, ಕರ್ಮಗಳು ಒ೦ದೇ ಆಗಿರುವುದು. ದುರಾತ್ಮರಿಗಾದರೋ ಮನಸ್ಸು, ವಚನ ಕರ್ಮಗಳೆಲ್ಲಾ ಬೇರೆ ಬೇರೆಯಾಗಿರುವುವು. "ಕ೦ಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ" ಎ೦ಬ೦ತೆ ಅವರ ಮಾತಿನಲ್ಲೇ ಒ೦ದು ಮನಸ್ಸಿನಲ್ಲೇ ಒ೦ದು ಇರುವುದು.
No comments:
Post a Comment
Note: Only a member of this blog may post a comment.