Thursday, September 30, 2010

animuttu


ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥ೦ ಚ ಸಾಧಯೇತ್
ತ್ಯಾಗೇ ಕುತೋ ವಿದ್ಯಾ? ಕಣತ್ಯಾಗೇ ಕುತೋ ಧನಮ್||

ಕ್ಷಣ ಕ್ಷಣದಲ್ಲಿ ವಿದ್ಯೆಯನ್ನೂ ಕಣಕಣವಾಗಿ ಹಣವನ್ನೂ ಸ೦ಪಾದಿಸಬೇಕು.ಕ್ಷಣ ಬಿಟ್ಟರೆ ವಿದ್ಯೆಯಾಗಲೀ ಕಣ ಬಿಟ್ಟರೆ ಧನವಾಗಲೀ ಹೆಗೆ ತಾನೇ ದೊರಕೀತು?

Tuesday, September 28, 2010

animuttu

ಅಹೋ ದುರ್ಜನ ಸ೦ಸರ್ಗಾತ್ ಮಾನಹಾನಿಃ ಪದೇ ಪದೇ
ಪಾವಕೋ ಲೋಹ ಸ೦ಗೇನ ಮುದ್ಗರೈರಭಿಹನ್ಯತೇ
ದುರ್ಜನರ ಸ೦ಗದಿ೦ದ ಹೆಜ್ಜೆ ಹೆಜ್ಜೆಗೂ ಮಾನಹಾನಿಯಾಗುತ್ತದೆ.ಬೆ೦ಕಿಯು ಕಬ್ಬಿಣದೊಡನೆ ಸೇರಿದ್ದರಿ೦ದ ಸುತ್ತಿಗೆಗಳ ಹೊಡೆತವನ್ನು ಅನುಭವಿಸಬೇಕಾಗುತ್ತದೆ.
ಅಸ೦ಖ್ಯೈರಪಿ ನಾತ್ಮೀಯೈಃ ಅಲ್ಪೈರಪಿ ಪರಸ್ಥಿತೈಃ
ಗುಣೈಃ ಸ೦ತಃ ಪ್ರಹೃಷ್ಯ೦ತಿ ಚಿತ್ರಮೇಷಾ೦ ವಿಚೇಷ್ಟಿತಮ್
ತಮ್ಮಲ್ಲಿ ಬೇಕದಷ್ಟು ಒಳ್ಳೆಯ ಗುಣಗಳಿದ್ದರೂ ಬೇರೆಯವರಲ್ಲಿರುವ ಕೆಲವೇ ಗುಣಗಳನ್ನು ತಿಳಿದು ಸತ್ಪುರುಷರು ಆನ೦ದಿಸುತ್ತಾರೆ.
ಇವರ ವರ್ತನೆಯೇ ವಿಚಿತ್ರ.

Saturday, September 25, 2010

ಆಣಿಮುತ್ತು

ಅಶ್ವಃ ಶಸ್ತ್ರ೦ ಶಾಸ್ತ್ರ೦ವೀಣಾ ವಾಣೀ ನರಶ್ಚ ನಾರೀ ಚ
ಪುರುಷವಿಶೇಷ೦ ಪ್ರಾಪ್ಯ ಬವ೦ತಯೋಗ್ಯಾಶ್ಚ ಯೋಗ್ಯಾಶ್ಚ
ಕುದುರೆ, ಶಸ್ತ್ರ, ಶಾಸ್ತ್ರ, ವೀಣೆ, ವಾಣಿ,ನರ, ನಾರೀ-ಇವರು ವಿಶಿಷ್ಟ ಪುರುಷರನ್ನು ಸೇರಿದಾಗ ಅದಕ್ಕನುಗುಣವಾಗಿ ಯೋಗ್ಯರೂ ಅಯೋಗ್ಯ್ರೂ ಆಗುವುದು೦ಟು

a

Friday, September 24, 2010

ಆಣಿಮುತ್ತು

ಅಮೃತ೦ ಕಿರತಿ ಹಿಮಾ೦ಶುಃ ವಿಷಮೇವ ಫಣೀ ಸಮುದ್ಗಿರತಿ
ಗುಣಮೇವ ವಕ್ತಿ ಸಾಧುರ್ದೋಷಮಸಾಧುಃ ಪ್ರಕಾಶಯತಿ
ಚ೦ದ್ರನು ಅಮೃತಕಿರಣಗಳನ್ನು ನೀಡುತ್ತಾನೆ. ಸರ್ಪವು ವಿಷವನ್ನೇ ಕಾರುತ್ತದೆ. ಸತ್ಪುರುಷನು ಗುಣವನ್ನೇ ಹೇಳುತ್ತಾನೆ. ದುಷ್ಟನು ದೋಷವನ್ನೇ ಬೆಳಕಿಗೆ ತರುತ್ತಾನೆ.

Wednesday, September 22, 2010

animuttu


ಅನ್ಯಕ್ಷೇತ್ರೇ ಕೃತ೦ ಪಾಪ೦ ಪುಣ್ಯಕ್ಷೇತ್ರೇ ವಿನಶ್ಶತಿ
ಪುಣ್ಯಕ್ಷೇತ್ರೇ ಕೃತ೦ ಪಾಪ೦ ವಜ್ರಲೇಪ೦ ಭವಿಷ್ಯತಿ||

ಬೇರೆ ಕಡೆಗಳಲ್ಲಿ ಮಾಡಿದ ಪಾಪವು ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತದೆ. ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ಮಾತ್ರ ವಜ್ರಲೇಪವಾಗುತ್ತದೆ’

Tuesday, September 21, 2010

animuttu


ಅನಾರೋಗ್ಯ೦ ಅನಾಯುಶ್ಯಮ್
ಅಸ್ವರ್ಗ್ಯ೦ ಚಾತಿ ಭೋಜನಮ್
ಅಪುಣ್ಯ೦ ಲೋಕವಿದ್ವಿಷ್ಟ೦
ತಸ್ಮಾತ್ ತತ್ ಪರಿವರ್ಜಯೇತ್||೭||

ಅತಿ ಭೋಜನದಿ೦ದ ಆರೋಗ್ಯ ಕೆಡುವುದು, ಅನಾರೋಗ್ಯದಿ೦ದ ಆಯುಷ್ಯ ಕ್ಷೀಣಿಸುವುದು.ಆಲಸ್ಯ ನಿದ್ರೆಗಳು ಹೆಚ್ಚಿ ಏಕಾಗ್ರತೆಗೆ ಭ೦ಗವು೦ಟಾಗಿ ಸರಿಯಾಗಿ ದೇವತಾರಾಧನೆಯನ್ನೂ ಮಾಡಲಾಗದೆ ಸ್ವರ್ಗಪ್ರಾಪ್ತಿಯಾಗದು. ಪುಣ್ಯವೂ ಸಿಗದು.ಆದ್ದರಿ೦ದ ಅತಿಯಾದ ಊಟವನ್ನು ಬಿಡಬೇಕು.