Monday, January 31, 2011

subhashita

||
ಜನ್ಮ ದುಃಖ೦ ಜರಾ ದುಃಖ೦ ಜಾಯಾ ದುಃಖ೦ ಪುನಃ ಪುನಃ|
ಸ೦ಸಾರಸಾಗರ೦ ದುಃಖ೦ ತಸ್ಮಾತ್ ಜಾಗ್ರತ ಜಾಗ್ರತಃ|

ಜನ್ಮವೂ ದುಃಖ ಮುಪ್ಪೂದುಃಖ, ಹೆ೦ಡತ್ಯೂ ಮತ್ತೆ ಮತ್ತೆ ದುಃಖವೇ. ಸ೦ಸಾರ ಸಾಗರವೇ ದುಃಖ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿರಿ ಜಾಗ್ರತೆ ಜಾಗ್ರತೆ.

Friday, January 28, 2011

hitanudi

ಬೆಟ್ಟದ ಮೇಲಿನಿ೦ದ ಉರುಳಿಬೀಳುವವರು ಕಡಿಮೆ.ಆದರೆ ಸಣ್ಣ ಕಲ್ಲುಗಳನ್ನು ಎಡವಿ ಬೀಳುವವರೇ ಹೆಚ್ಚು. ಆದ್ದರಿ೦ದ ಸಣ್ಣತಪ್ಪುಗಳನ್ನು ನಿರ್ಲಕ್ಷಿಸದೆ ತಿದ್ದಿಕೊಳ್ಳೋಣ.

Thursday, January 27, 2011

Dear mom,

Thanks for all the post. they are all really nice. i was missing them a lot from last few months. only today i read them. thank you

chandana

subhashita


ಮಾ೦ಸ೦ ಮೃಗಾಣಾ೦ ದಶನೌ ಗಜಾನಾ೦
ಮೃಗದ್ವಿಷಾ೦ ಫಲ೦ ದೃಮಾಣಾಮ್
ಸ್ತ್ರೀ ಣಾ೦ರೂಪ೦ ಚ ನೃಣಾ೦ ಹಿರಣ್ಯ೦
ಸ್ವಭಾವಜಾ ವೈರಿಗುಣಾ ಭವ೦ತಿ||

ಮಾ೦ಸವು ಮೃಗಗಳಿಗೂ, ದ೦ತವು ಆನೆಗಳಿಗೂ ಚರ್ಮವು ಸಿ೦ಹ, ಹುಲಿ, ಚಿರತೆಗಳಿಗೂ, ಹಣ್ಣುಗಳು ಮರಗಳಿಗೂ, ರೂಪವು ಸ್ತ್ರೀಯರಿಗೂ, ಸ೦ಪತ್ತು ಮನುಷ್ಯರಿಗೂ ಸ್ವಭಾವಸಿದ್ಧ ಶತ್ರುಗಳಾಗಿರುತ್ತವೆ


Wednesday, January 26, 2011

subhashita


ಉದಾರಸ್ಯ ತೃಣ೦ ವಿತ್ತ೦ ಶೂರಸ್ಯ ಮರಣ೦ ತೃಣಮ್|
ವಿರಕ್ತಸ್ಯ ತೃಣ೦ ಭಾರ್ಯಾ ನಿಃಸ್ಪೃಹಸ್ಯ ತೃಣ೦ ಜಗತ್||೭೭||

ಉದಾರಿಗೆ ಹಣವೆ೦ಬುದು ಹುಲ್ಲಿಗೆ ಸಮಾನ, ಶೂರನಿಗೆ ಮರಣವು ಹುಲ್ಲಿಗೆ ಸಮಾನ,ವಿರಕ್ತನಿಗೆ ಹೆ೦ಡತಿಯು ಹುಲ್ಲಿಗೆ ಸಮಾನ,ಆಶೆಯಿಲ್ಲದವನಿಗೆ ಈ ಇಡೀ ಜಗತ್ತೇ ಹುಲ್ಲಿಗೆ ಸಮಾನ.

Tuesday, January 25, 2011

subhashita


ಅಣುಭ್ಯಶ್ಚ ಮಹದ್ಭ್ಯಶ್ಚ ಶಾಸ್ತ್ರೇಭ್ಯ್ಃ ಕುಶಲೋ ನರಃ
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯ ಇವ..ಷಟ್ಪದಃ|೮೨|

ದು೦ಬಿಯು ನಾನಾ ಪುಷ್ಪಗಳಿ೦ದ ಮಕರ೦ದವನ್ನು ಹೀರುವ೦ತೆ ಜಾಣನಾದ ಮನುಷ್ಯನು ಶಾಸ್ತ್ರಗಳಿ೦ದ ಸಾರವನ್ನು ಸ್ವೀಕರಿಸಬೇಕು.ಆ ಶಾಸ್ತ್ರ್ರಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು.

Monday, January 24, 2011

vAave mattu gaTTipada


ಕ೦ದನ ಜರೆದನ ತ೦ದೆಯನು೦ಡ೦ಗೆ
ವ೦ದಿಸಿದನ ವೈರಿವನವ
ತಿ೦ದನ ಹಯಮುಖದ೦ದನ ಕುವರಿಯ
ತ೦ದ ಮಣ್ಣೇಶ ಮಾ೦ ತ್ರಾಹಿ

ಯೋಜನಗ೦ಧಿಯ ಶಿಶುವಾದ ವೇದವ್ಯಾಸನನ್ನು ಧಿಕ್ಕರಿಸಿದ ದೂರ್ವಾಸನ ತ೦ದೆ ಕರಿಕೆಯನ್ನು೦ಡ ನ೦ದೀಶ್ವರನಿಗೆ ನಮಸ್ಕರಿಸಿದ ಗಿರಿರಾಜನ ವೈರಿ ದೇವೇ೦ದ್ರನ ಉದ್ಯಾನ ಖಾ೦ಡವವನವನ್ನು (ದಹಿಸಿದ) ಭಕ್ಷಿಸಿದ ಕುದುರೆಅವಿಯ ವದನದ೦ಥ ವದನವನ್ನು ಹೊ೦ದಿದದಕ್ಷಬ್ರಹ್ಮನ ಮಗಳು ದಾಕ್ಷಾಯಣಿಯನ್ನು ಕರೆತ೦ದ೦ಥ ಮಣ್ಣೇಶನೇ ನಮ್ಮನ್ನು ಕಾಪಾಡು.